Tuesday, January 17, 2012

ಯಾವುದುಕ್ಕೂ

ಯಾವುದಕ್ಕೂ ಹುಷಾರಾಗಿರಬೇಕು ನಾವು
ಯಾವುದಕ್ಕೂ ಒಂದ್ ಮಾತಾ ಕೇಳ್ ನೋಡು,
ಯಾವುದಕ್ಕೂ ಹೆದ್ರಲ್ಲ ನಾನು
ಯಾವುದಕ್ಕೂ ತಲೆ ಕೆಡ್ಸ್ಕೋಳೋಲಾ ನಾನು
ಯಾವುದುಕ್ಕೂ ಯೋಚಿಸಬೇಡ ನಾನಿದಿನಿ
 ಯಾವುದುಕ್ಕೂ ತಲೆ ಹಾಕ್ ಬೇಡ..
ಯಾವುದುಕ್ಕೂ  ಮೊದಲು ಮನೆ ಸೇರು....

ಈ "ಯಾವುದುಕ್ಕೂ "  ಅನ್ನೋದು  ಯಾವುದು ಗುರು ?

Monday, May 16, 2011

ನಮ್ಮ ಪಠ್ಯ ಪುಸ್ತಕಗಳು

ನಮ್ಮ ಪಠ್ಯ ಪುಸ್ತಕಗಳು

ಕಳೆದ ಕೆಲವು ದಿನಗಳಿಂದ ಈ ಯೋಚನೆ ಮಾಡ್ತಾ ಇದ್ದೇ... ನಮ್ಮ ಪಠ್ಯ  ಪುಸ್ತಕಗಳು..ಹಾಗೂ ಸಮಕಾಲೀನ ಅವಶ್ಯಕತೆಗಳ ಬಗ್ಗೆ.. ಈ ಮುಂಚೆ ಕೂಡ
ಹಲವು ಸಂಶೋಧನೆಗಳು , ಚರ್ಚೆಗಳು ನಡೆದಿವೆ ..ನಡೆಯುತ್ತಿವೆ...

SSLC yalli  ಶೇಕಡ ೭೩ ವಿದ್ಯಾರ್ಥಿಗಳು...ಉತ್ತೀರ್ಣರಾಗಿದ್ದಾರೆ.....ಇದೊಂದು ಐತಿಹಾಸಿಕ ಫಲಿತಾಂಶ ಎಂದು ಹೇಳಲಾಗಿದೆ..

ಈ ವಿದ್ಯಾರ್ಥಿಗಳಲ್ಲ್ಲಿ  ಎಷ್ಟು ಜನ ಮುಂದೆ ಪೀಯೂಸೀ,ಡಿಪ್ಲೊಮಾ.. ಮಾಡುತ್ತಾರೋ ಗೊತ್ತಿಲ್ಲ ಆದ್ರೆ...   ಬಹಳ ಜನ  ಇಲ್ಲಿಗೆ ತಮ್ಮ ವಿಧ್ಯಬ್ಯಾಸ ನಿಲ್ಲಿಸಿ..
ಹೊಲ ಗದ್ದೆ ಗಾಳಿಗೂ, ಹೊಟೇಲಿನಲ್ಲಿ ಕೆಳ್‌ಸಾಕ್ಕೆ ಸೇರಿ ಬಿಡುತ್ತಾರೆ... ಜಾಣರಾಗಿರದೆ ಇರಬಹ್ದು..ಅಥ್ವಾ ದುಡ್ಡಿರದೆ ಇರಬಹ್ದು...

ಆದ್ರೆ ಎಸ್ಟು ಜನ್ರಿಗೆ. ಇಲ್ಲಿಯವರೆಗೆ  ಕಲಿತ ವಿದ್ಯೆ.. ಸಹಾಯಕಾರಿಯಾಗಿದೆ ಬದುಕಿನಲ್ಲಿ..?

ನಾವು ನೋಡುತ್ತಿರುವ ಕೆಲವು ಮೂಲಭೂತ ಸಮಸ್ಯಎಗಳನ್ನು...ಇವರು ತಿಳಿಯಬಲ್ಲ್ರೆ ?

ಹೀಗೆ ಕೆಲವು ಪ್ರಶ್ನೆ ಗಳಿವೆ ನನ್ನ ಮನದಲ್ಲಿ ..

ತೆರಿಗೆ ಎಂದರೇನು ? ಯಾಕೆ ತೆರಿಗೆ ಕೊಡಬೇಕು ? ತೆರಿಗೆಇಂದೇನು ಮಾಡುತ್ತಾರೆ..?
ಬ್ಯಾಂಕು, ಅಂದರೆ ಏನು ? ವಿಮೆ ಅಂದರೇನು ?  ಯಾಕೆ ವಿಮೆ ಬೇಕು ?
ನಿಜ ಹೇಳುತ್ತೇನೆ ಇವತ್ತಿಗೂ ಕೂಡ  ಠೇವಣಿ ಸ್ಲಿಪ್ ಯಾವುದು ? ಜಮೆ ಸ್ಲಿಪ್ ಯಾವುದು ಎಂದು ತಿಳುವದಿಲ್ಲ ನಂಗೆ ....
ಅಪರಾಧ ಅಂದ್ರೆ ಏನು ? ಪೋಲೀಸ್ ಯಾರು ಯಾಕೆ ಅವರು ಬೇಕು ?
ಧರ್ಮಗಳ ಬಗ್ಗೆ ಹೇಳ್ಲಿದೀವಿ  ಆದ್ರೆ ಅದರ ಹಿಂದಿರೋ - ಶಾಂತಿ ಸಹಬಾಳ್ವೆ ಬಗ್ಗೆ ಎಲ್ಲಿ ಹೇಳುತ್ತಿವಿ ?
ವಿದ್ಯುತ್ ಎಂದ್ರೇನು ಗೊತ್ತು ಆದ್ರೆ ,ವಿದ್ಯುತ್ ತಂತಿ ಕಟ್ತಾಗಿ ಬಿದ್ದಾಗ ಏನು ಮಾಡಬೇಕು ?..
ಎಲ್ಲಿ ? ಮೂಢ ನಂಬಿಕೆ ಎಂದರೆ ಏನು ? ಜ್ಯೊತಿಶ್ಯ್ ಏನು ?


ಆಹಾರ ಸರಪಣಿ     ಗೊತ್ತು , ಆಹಾರ ಕಾಲ್ಬೆರಕೆ ?
ಔಷದಿ ಗೊತ್ತು .. ಆದ್ರೆ - expiry date andrenu  ಗೊತ್ತಿಲ್ಲ .....


ನಿಮ್ಮ ವಿಚಾರ ಗಲ್ಲನ್ನು ಇಲ್ಲಿ ನಮೂದಿಸಿ....

We can take it forward ... ( please forgive my kannada typing skill ...)



Wednesday, May 11, 2011

ಹಾಯಿ ದೋಣಿ, ಸಂಜೆಯ ನೋಡುತಾ, ಸೂರ್ಯನಿಗೆ ಹೇಳಿದ ಮಾತು

ಹಾಯಿ ದೋಣಿ, ಸಂಜೆಯ ನೋಡುತಾ, ಸೂರ್ಯನಿಗೆ ಹೇಳಿದ ಮಾತು 
ಒಂದಲ್ಲ ಒಂದು ದಿನ, ನೀನು ಮುಳುಗೋಕಿಂತ ಮುಂಚೆ ನಿನ್ನ ಹಿಡಿದೆ ಹಿಡೀತೀನಿ ಎಂದು.. 

ಆಡಿ,ಅತ್ತು, ಕುಣಿದು, ನಕ್ಕು, ಸುಸ್ತಾದ ಮಗು ತಬ್ಬಿಕೊಂಡು ಹೇಳಿದ ಮಾತು 
ನಾನಿನ್ನೂ ಮಲಗಬೇಕು..ಎಂದು.. 

ಕಳೆದು ಹೋದ ಆಡುಮರಿಗೆ , ಕಾಡು ಹೇಳಿದ ಮಾತು 
ಹೆದರಬೇಡ, ಇದು ಬರಿ ಕಾಡು ಎಂದು.. 

ಶ್ರುತಿ ಬಿಡದ ಸೋನೆ ಮಳೆ,ಭೂವಿಗೆ ಹೇಳಿದ ಮಾತು 
ಶೀತವಾದರೆ ನಾನಲ್ಲ ಹೊಣೆ, ಅದು ಮೋಡ ಎಂದು.. 




ಕಾರ್ರ್ಮುಗಿಲಿಂದ ಹೊರಟ ಮಿಂಚು, ಬೆಳಕ ಕಾಣದ ಕಾನನಕ್ಕೆ
ಹೇಳಿದ ಮಾತು, ಇದೋ ನೋಡು ಕಣ್ಣು ಕೊರಯ್ಸುವ  ಚಳಕ


ಹೊಳೆಯ ಬದಿ ಗರ್ಜಿಸುದ ಹುಲಿ, ಆನೆಗೆ ಹೇಳಿದ ಮಾತು 
ಇದು ನನ್ನ ಸರಹದ್ದು ಎಂದು... 

ಬೀಸುಗಾಳಿ, ಹಾರುವ ಹಕ್ಕಿಗೆ ಹೇಳಿದ ಮಾತು 
ತೋರಿಸು ಈಗ ನಿನ್ನ ಗಮ್ಮತು.. ಎಂದು 

ಮುಂಜಾವಿನ ಇಬ್ಬನಿ ಚಂದ್ರನಿಗೆ ಹೇಳಿದ ಮಾತು.. 
ಇದೆಲ್ಲ ನಿನ್ನದೆ ಕರಾಮತ್ತು ಎಂದು.. 

ಕಾಡಿಗೆಯಲ್ಲಿ ಕಂಡ ಹೆಣ್ನ ಕಣ್ಣು ಹೇಳಿದ ಮಾತು 
ಗೆಳೆಯ, ಹೇಳು ಪ್ರಶ್ನೊತ್ತರವಿಲ್ಲದ ಸಂಗತಿ ಎಂದು.. 

ಅರ್ಧಕೆ ನಿಂತ ಕವಿತೆ , ಕವಿಗೆ ಹೇಳಿದ ಮಾತು 
ಪರ್ವಾಗಿಲ್ಲಾ, ನಾಳೆ ಮುಂದುವರಿಸು..ಎಂದು

Tuesday, November 30, 2010

ಹಾಯಿ ದೋಣಿ, ಸಂಜೆಯ ನೋಡುತಾ, ಸೂರ್ಯನಿಗೆ ಹೇಳಿದ ಮಾತು

ಹಾಯಿ ದೋಣಿ, ಸಂಜೆಯ ನೋಡುತಾ, ಸೂರ್ಯನಿಗೆ ಹೇಳಿದ ಮಾತು 
ಒಂದಲ್ಲ ಒಂದು ದಿನ, ನೀನು ಮುಳುಗೋಕಿಂತ ಮುಂಚೆ ನಿನ್ನ ಹಿಡಿದೆ ಹಿಡೀತೀನಿ ಎಂದು.. 

ಆಡಿ,ಅತ್ತು, ಕುಣಿದು, ನಕ್ಕು, ಸುಸ್ತಾದ ಮಗು ತಬ್ಬಿಕೊಂಡು ಹೇಳಿದ ಮಾತು 
ನಾನಿನ್ನೂ ಮಲಗಬೇಕು..ಎಂದು.. 

ಕಳೆದು ಹೋದ ಆಡುಮರಿಗೆ , ಕಾಡು ಹೇಳಿದ ಮಾತು 
ಹೆದರಬೇಡ, ಇದು ಬರಿ ಕಾಡು ಎಂದು.. 

ಶ್ರುತಿ ಬಿಡದ ಸೋನೆ ಮಳೆ,ಭೂವಿಗೆ ಹೇಳಿದ ಮಾತು 
ಶೀತವಾದರೆ ನಾನಲ್ಲ ಹೊಣೆ, ಅದು ಮೋಡ ಎಂದು.. 




ಕಾರ್ರ್ಮುಗಿಲಿಂದ ಹೊರಟ ಮಿಂಚು, ಬೆಳಕ ಕಾಣದ ಕಾನನಕ್ಕೆ
ಹೇಳಿದ ಮಾತು, ಇದೋ ನೋಡು ಕಣ್ಣು ಕೊರಯ್ಸುವ  ಚಳಕ


ಹೊಳೆಯ ಬದಿ ಗರ್ಜಿಸುದ ಹುಲಿ, ಆನೆಗೆ ಹೇಳಿದ ಮಾತು 
ಇದು ನನ್ನ ಸರಹದ್ದು ಎಂದು... 

ಬೀಸುಗಾಳಿ, ಹಾರುವ ಹಕ್ಕಿಗೆ ಹೇಳಿದ ಮಾತು 
ತೋರಿಸು ಈಗ ನಿನ್ನ ಗಮ್ಮತು.. ಎಂದು 

ಮುಂಜಾವಿನ ಇಬ್ಬನಿ ಚಂದ್ರನಿಗೆ ಹೇಳಿದ ಮಾತು.. 
ಇದೆಲ್ಲ ನಿನ್ನದೆ ಕರಾಮತ್ತು ಎಂದು.. 

ಕಾಡಿಗೆಯಲ್ಲಿ ಕಂಡ ಹೆಣ್ನ ಕಣ್ಣು ಹೇಳಿದ ಮಾತು 
ಗೆಳೆಯ, ಹೇಳು ಪ್ರಶ್ನೊತ್ತರವಿಲ್ಲದ ಸಂಗತಿ ಎಂದು.. 

ಅರ್ಧಕೆ ನಿಂತ ಕವಿತೆ , ಕವಿಗೆ ಹೇಳಿದ ಮಾತು 
ಪರ್ವಾಗಿಲ್ಲಾ, ನಾಳೆ ಮುಂದುವರಿಸು..ಎಂದು

Tuesday, November 23, 2010

ನಾನೇಕೆ ಕನ್ನಡಿಗ ಹೇಳಲೇ


ನಾನೇಕೆ ಕನ್ನಡಿಗ ಹೇಳಲೇ

ಕಣ್ಣು ತೇವ ಮಾಡಿಕೊಂಡ ಹುಡುಗ 61 A  ನಲ್ಲ್ಲಿ
ಬಿಕ್ಕಿ ಬಿಕ್ಕಿ ಅತ್ತ್ತಾ ಹುಡುಗಿ 5 ನೇ ಪ್ಲ್ಯಾಟ್ಫಾರ್ಮ್ ಅಲ್ಲಿ
ವಿಷ್ಣು ಹೋದರೆಂದು ತಿಳಿದು, ಅದ ನೋಡಿ ನಾ ಕನ್ನಡಿಗ

ಕನ್ನಡಾ ಸರ್ಕಾರಿ ಶಾಲೇಲಿ  ಓದಿ , ಇವತ್ತು ನಾಸ್ಡೋಕ್ ಪ್ರೆಸಿಡೆಂಟು
ಇದ ಕೇಳಿ ನಾ ಕನ್ನಡಿಗ

ಶಂಕರ್ ನಾಗ್ ಇದ್ದಿದ್ರೆ , ಆಸ್ಕರ್ ಏನು ನೋಬಲ್ ಬರೋದು..
ಅಂದ ಮಾತು ಕೇಳಿ  ನಾ ಕನ್ನಡಿಗ

ರಾಜ್ ಕುಮಾರ ಇದ್ದಾಂಗಿದನೆ , ಎಂದು ಲಟಿಕೆ ತೆಗೆದ ಮುದುಕಿಯ
ನೋಡಿದಾಗ ನಾನು ಕನ್ನಡಿಗ

ತೇಜಸ್ವೀಯ ಜುಗಾರಿ ಕ್ರಾಸ್ ನಲ್ಲಿ ಕಳೆದು ಹೋದಾಗ ನಾನು ಕನ್ನಡಿಗ

ಅಮ್ಮ,  "ಹೋಗಿ ಬಾ ಬನವಾಸಿಗೆ , ತಿಳಿದು ಬಾ " ಆರಂಕುಶ" ಅಂದ್ರೇನು "
ಎಂದಾಗ ನಾನು ಕನ್ನಡಿಗ

ಇನ್ನೂ ತುಂಬಾ ಇದೆ ಹೇಳ್ಲಿಕ್ಕೆ ನಾನೇಕೆ ಕನ್ನಡಿಗ ಅಂತ.... ನೀವು ಹೇಳಿದರೆ ಇನ್ನೂ ಹೆಚ್ಚು ಕನ್ನಡಿಗ ನಾನು.

Monday, September 27, 2010

U....and .....I



Keep India Unite d
On 28/9  or whenever the verdict is out

STOP BREEDING HATREDNESS

LETS GIVE OURSELVES A BETTER INDIA







Wednesday, September 22, 2010

lucky

 

ಕ್ಯಾಮರಮ್ಯಾನ್ ಜೊತೆ "ಅನಿತಾಟಿವಿ 9 ಮಂಗಳೂರ್
ಕ್ಯಾಮರಮ್ಯಾನ್ ಜೊತೆ "ಸುಗುಣಾಟಿವಿ 9 ಗುಲ್ಬರ್ಗಾ
ಕ್ಯಾಮರಮ್ಯಾನ್ ಜೊತೆ "ಉಷಾಟಿವಿ 9 ಹುಬ್ಳೀ
 ಕ್ಯಾಮರಮ್ಯಾನ್ ಏನ್ ಲಕ್ಕೀ ಅದಾನ್ಲೇ

 

Friday, September 17, 2010

ಪಂಡಿತ ಪುಟ್ಟರಾಜ ಗವಾಯಿ ಗಾನಗಂಗೆಯಲ್ಲಿ ಲೀನ

 
ಗದಗ, ಸೆ. 17 : ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಅಂಧರ ಬಾಳಿನ ಅಶಾಕಿರಣವಾಗಿದ್ದ ಗದಗಿನ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಕವಿ ಗವಾಯಿಗಳು(97) ಶುಕ್ರವಾರ ಮಧ್ಯಾಹ್ನ 12.15ಕ್ಕೆ ಲಿಂಗೈಕ್ಯರಾಗಿದ್ದಾರೆ. ನಾಳೆ ವೀರೇಶ್ವರ ಪುಣ್ಯಾಶ್ರಮದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.
ಕಳೆದ ಹಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಸೋಮವಾರ ತೀವ್ರ ಅನಾರೋಗ್ಯಕ್ಕೆ ಒಳಗಾದ ಅವರನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಅವರ ಅಶಯದಂತೆ ಗದಗಿನ ವೀರೇಶ್ವರ ಆಶ್ರಮಕ್ಕೆ ಕರೆದುಕೊಂಡು ಬರಲಾಗಿತ್ತು.

ಇಂದು ಬೆಳಗ್ಗೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿತು. ತಕ್ಷಣ ಆಶ್ರಮಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಚೆನ್ನಶೆಟ್ಟಿ ನೇತೃತ್ವದ ತಂಡ ಶ್ರೀಗಳಿಗೆ ಚಿಕಿತ್ಸೆ ನಡೆಸಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಲಿಂಗೈಕ್ಯರಾಗಿರುವುದನ್ನು ಚೆನ್ನಶೆಟ್ಟಿ ಖಚಿತಪಡಿಸಿದ್ದಾರೆ. ಜಗತ್ತಿನಾದ್ಯಂತ ಇರುವ ಅವರ ಕೋಟ್ಯಂತರ ಭಕ್ತರಿಗೆ ಶ್ರೀಗಳ ನಿಧನದ ಸುದ್ದಿ ತೀವ್ರ ಆಘಾತ ಉಂಟು ಮಾಡಿದೆ. ಮಠದಲ್ಲಿ ಶೋಕಸಾಗರ ಮನೆ ಮಾಡಿದೆ
last persona of gods on earth.. 
 

Sunday, September 12, 2010

ಬಾ ಕುಳಿತುಕೊ, ಇದು ನಾ ಬೆಳೆದ ಕೃಷ್ಣಾ ತೀರ

ಮೌನದಲಿ ಮಾತುಗಳೆಲ್ಲಾ ಕರಗಿ,
ದುಗುಡ ದುಮ್ಮಾನ ಹರಿವ ನೀರೊಂದಿಗೆ ಜರುಗಿ

ಮಿನ್ಚುಳ್ಳಿಯ ಹಾರಾಟದಿ ಮನಸು ಮರೆತು
ಕಬ್ಬಿನ ತೋಟದಿ ಸಿಹಿಯ ಸವಿದು
ಅಮೃತವೆ ಘನಿಭವಿಸಿದ ಬೆಲ್ಲ್ ಮೆದ್ದು
ಸಾಲು ಮರಗಳ ನೆರಳು, ಬಿಸಿಲಲಿ ನೆನೆದು
ಬಾ ಕುಳಿತುಕೊ, ಇದು ನಾ ಬೆಳೆದ ಕೃಷ್ಣಾ ತೀರ


ದೂರ ದೂರಕು ಎಲ್ಲವೂ ನನ್ನದೇ ಎನ್ನುವ ಹಸಿರಿನ ಜಿದ್ದು
ಬೀಸುಗಾಳಿಯೊ, ಕದ್ಡೋಯಬೇಕು ನಿನ್ನ ಎನ್ನುವ ಚೋರ
ಬಾ ಕುಳಿತುಕೊ, ಇದು ನಾ ಬೆಳೆದ ಕೃಷ್ಣಾ ತೀರ